stat Counter



Friday, March 11, 2011

Taayi- s devendra pejattaaya[kannada-2011

ತಾಯಿ

(ಮಹರ್ಷಿ ಅರಬಿಂದೋರವರ ಚಿಂತನೆಯ ಧಾರೆಯಲ್ಲಿ)

 ಎಸ್. ದೇವೇಂದ್ರ ಪೆಜತ್ತಾಯರು (ಜನನ - 1931) ತಾಯಿಯನ್ನು ಕುರಿತ ಮಹರ್ಷಿಅರವಿಂದರ ತೊಂಬತ್ತೆರಡು ಸಾಲುಗಳನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ತಂದಿದ್ದಾರೆ.  ಈ ಭಾಷಾಂತರದಲ್ಲಿ ಅರವಿಂದರ ಹೊಳಹುಗಳು ಮಾತ್ರವಲ್ಲದೆ ಅವರ ಕಾವ್ಯಸ್ಪರ್ಶವಿರುವ ಗದ್ಯವೂ ಕಾಣಿಸುತ್ತದೆ.

 ಮೂರು ಉದಾಹರಣೆಯ ಸಾಲುಗಳು ಇಲ್ಲಿವೆ.

 ಅವಳು ಭಿನ್ನ, ವಿಭಿನ್ನ ಬನ್ನಗಳನ್ನು ದಾಟಿಸುವ, ಚಿನ್ನದ ಹರಿಗೋಲಾಗುತ್ತಾಳೆ.  ಅಚ್ಚರಿಯ ಅವಿಚ್ಛಿನ್ನ ಶಕ್ತಿ ಸೌಂದರ್ಯದ ಪ್ರಜ್ವಲಿಸುವ ಜ್ಯೋತಿಯಾಗುತ್ತಾಳೆ. (44)

 ತಾಯಿಯ ಸನಿಹದಲ್ಲಿ ತರೆದು ನಿರ್ಮಲ ಹೃದಯೀ ಮನಸ್ಕರಾಗಿರಬೇಕಾದರೆ ನೀನು ಸದಾ ಶಾಂತಚಿತ್ತನಾಗಿ, ಆತ್ಮಸ್ಥೈರ್ಯದಿಂದ, ಆನಂದದಿಂದ ಇರಬೇಕು.  ಚಂಚಲಚಿತ್ತನಾಗಿ, ದುಃಖಿತನಾಗಿ ಅಥವಾ ಹತಾಶನಾಗಿ ನೀನು ಇರಬಾರದು. (49)

 ನೀನು ತರೆದ ಮನಸ್ಸಿನ ಪ್ರಶಾಂತತೆಯಲ್ಲಿ ಇರಲು ಅಸಾಧ್ಯವೆನಿಸಿದಾಗ ಸತತ ಧ್ಯಾನ, ಏಕಾಗ್ರತೆಯ ಮೌನದಿಂದ ಇರಬೇಕು.  ಆಗ ಪ್ರಯತ್ನಶೀಲ ನಿನ್ನ ನಿರ್ಮಲ ಚಿತ್ತ ತರೆದುಕೊಳ್ಳುತ್ತದೆ - ಅವಳೆಡೆಗೆ. (51)
 ಇದು ಅರವಿಂದ ಮಾತೃಸಂಹಿತೆ.  ದೇವೇಂದ್ರ ಪೆಜತ್ತಾಯರ ಅನುವಾದ ಅರವಿಂದ ಮಾತೃಸಂಹಿತೆಯನ್ನು ಮನದಟ್ಟು ಮಾಡಿಸುತ್ತದೆ.

- ಮುರಳೀಧರ ಉಪಾಧ್ಯ ಹಿರಿಯಡಕ

ತಾಯಿ
(ಮಹರ್ಷಿ ಅರಬಿಂದೋರವರ ಚಿಂತನೆಯ ಧಾರೆಯಲ್ಲಿ)
ವಲ್ಲರಿ ಶಾರ್ವರಿ ಪ್ರಕಾಶನ
'ದೇವತಾ'
ವಳಕಾಡು, ಉಡುಪಿ 576 101
ಮೊದಲ ಮುದ್ರಣ - 2011
lಬೆಲೆ ರೂ.38
 mobile-9449615308[ s d pejattaya]

No comments:

Post a Comment