stat Counter



Friday, March 25, 2011

Vachanasahitya.gov.in

ವೆಬ್‍ಸೈಟ್‍ಗಳಿವುಂಟು, ವಚನಕ್ಕಳಿವಿಲ್ಲ!

ಸಮಗ್ರ ವಚನಗಳ ವೆಬ್‍ಸೈಟ್ ‍ಆರಂಭವಾದಾಗ ಸುದ್ದಿಯಾಗಿತ್ತು.  ಆದರೆ ಈಗ ವೆಬ್‍ಸೈಟ್‍ನ ದು:ಸ್ಥಿತಿ ನೋಡಿದಾಗ 'ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ' ಎಂಬ ಬಸವಣ್ಣನವರ ವಚನ ನೆನಪಾಗುತ್ತದೆ.  ವೆಬ್‍ಸೈಟ್‍ನ ದು:ಸ್ಥಿತಿಗೆ ತಾಂತ್ರಿಕ ತೊಂದರೆ ಕಾರಣವೋ, ಹಣ ಪಾವತಿ ಬಾಕಿ ಇರುವುದು ಕಾರಣವೋ - ತನಿಖೆ ಮಾಡುವವರು ಯಾರು?

ಆದರೆ ಬ್ಲಾಗ್ ಭಕ್ತರಾದ ಶರಣರು, ವಚನಪ್ರಿಯರು ಮನಸ್ಸು ಮಾಡಿದರೆ, ಒಬ್ಬೊಬ್ಬ ವಚನಕಾರನ ಹೆಸರಲ್ಲಿ ಒಂದೊಂದು ಬ್ಲಾಗ್ ಆರಂಭಿಸಿ, ದಿನಕ್ಕೊಂದು ವಚನ ಅಂತರ್ಜಾಲಕ್ಕೆ ಸೇರಿಸಿ, ಅನುಭವ ಗಳಿಸುತ್ತ, ಅನುಭಾವಿಗಳಾಗಬಹುದು. ನೀವು 'ಅನುಭವ ಮಂಟಪ', 'ಚೆನ್ನಮಲ್ಲಿಕಾರ್ಜುನ', ಕೂಡಲಸಂಗಮದೇವ', 'ಗುಹೇಶ್ವರ', 'ನಗೆಯ ಮಾರಿತಂದೆ' -ಇಂಥ ಬ್ಲಾಗ್‍ಗಳನ್ನುಆರಂಭಿಸಿದರೆ ದಯವಿಟ್ಟು ನನಗೆ ತಿಳಿಸಿ.


mhupadhya@gmail.com           
  mobile -9448215779

No comments:

Post a Comment