stat Counter



Saturday, June 23, 2012

ಪ್ರೊ /ಎನ್.ಬಾಲಸುಬ್ರಹ್ಮಣ್ಯರಿಗೆ ಅಂತಿಮ ನಮನ

ಮೈಸೂರು ವಿಶ್ಶ್ವವಿದ್ಯಾನಿಲಯದ ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಕನ್ನಡದ ಹಿರಿಯ ತಲೆಮಾರಿನ ಲೇಖಕ ,ಅನುವಾದಕ ಪ್ರೊ / ಎನ್.ಬಾಲಸುಬ್ರಹ್ಮಣ್ಯ ಅವರು 16-6-2012 ರಂದು ನಮ್ಮನ್ನಗಲಿದ್ದಾರೆ.
 ತೀ.ನಂ.ಶ್ರೀ ಅವರ ಭಾರತೀಯ ಕಾವ್ಯ ಮೀಮಾಂಸೆಯ ಇಂಗ್ಲೀಷ್ ಅನುವಾದ -INDIAN POETICS- ಬಾಲಸುಬ್ರಹ್ಮಣ್ಯರ ಮಹತ್ವದ  ಕೊಡುಗೆ .ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಈ ಪುಸ್ತಕ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿದೆ.
  ಹೊರೇಸನ ಸಾಹಿತ್ಯ ವಿಮರ್ಶೆ’ , ಸರ್ ಫಿಲಿಪ್ ಸಿಡ್ನಿಯ ಕಾವ್ಯ ಸಮರ್ಥನೆ ’ ತುಲಸೀದಾಸರು {ದೇವೇಂದ್ರ ಸಿಂಗ್- NBT } ಅವರು ಅನುವಾದಿಸಿರುವ ಇತರ ಪುಸ್ತಕಗಳು.ಅಮರಕೋಶ ಅವರು ಸಂಪಾದಿಸಿದ ಗ್ರಂಥ.್ ಎನ್. ಬಾಲಸುಬ್ರಹ್ಮಮಣ್ಯರ ’ಪ್ರಾಸಂಗಿಕ ಸಂಬಂಧಗಳು ’ ಪುಸ್ತಕವನ್ನು ಅಂಕಿತ ಪ್ರಕಟಿಸಿದೆ. .ರುದ್ರ ಸಾಹಿತ್ಯದಲ್ಲಿ ಆನಂದಾಸ್ವಾದ " { ಪ್ರಬುದ್ಧ ಕರ್ನಾಟಕ -1953 ] ಮತ್ತಿತರ ಅವರ ಹಲವು ಲೇಖನಗಳು ಪ್ರಕಟವಾಗಿವೆ.
 ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ ಇವರಿಗೆ  ಸೇಡಿಯಾಪು ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.ಕೆಲವು ವರ್ಷ್ಗಗಳ ಹಿಂದೆ ಅವರು ಉಡುಪಿಯಲ್ಲಿ - ಮಗನ ಮನೆಯಲ್ಲಿ -ಇದ್ದಾಗ  ಅವರ ಒಂದೆರಡು ವಿದ್ವತ್ಪ್ಪೂರ್ಣ ಭಾಷಣ ಕೇಳುವ ನನಗೆ ಸಿಕ್ಕಿತ್ತು.
 ಪ್ರೊ / ಎನ್. ಬಾಲಸುಬ್ರಹ್ಮಣ್ಯರ  ನಿಧನ ಕನ್ನಡ ಪತ್ರಿಕೆಗಳಲ್ಲಿ ವರದಿಯಾಗದಿರುವುದು ಸಖೇದ ಆಶ್ಚರ್ಯದ ಸಂಗತಿ .ಕಾವ್ಯದ ಅನಾದರ / ಪೂರ್ವಸೂರಿಗಳ ಅನಾದರ ಒಂದೇ ನಾಣ್ಯದ ಎರಡು ಮುಖಗಳಲ್ಲವೇ ?
- ಮುರಳೀಧರ ಉಪಾಧ್ಯ ಹಿರಿಯಡಕ
  Pro. N. Balasubrahmanya , retired English Pro, Maharaja's College Mysore expired on 16-6-2012. Indian Poetics { English Traslation of T. N. Shreekantaiyya's Kannada book-Bharateeya Kavya Mimamse ' { Sahitya Academi }is his major contribution  to Indian Literature .

No comments:

Post a Comment