stat Counter



Wednesday, July 29, 2015

ವೈದೇಹಿ ---- ರಥಬೀದಿ ಗೆಳೆಯರ - ಮಹಿಳಾ ಭಾರತ [ ನಿ-ಡಾ / ಶ್ರೀಪಾದ ಭಟ್



ಮಹಿಳಾ ಭಾರತ .......
ಮಹಾಭಾರತದ ವಿವಿಧ ಪಾತ್ರಗಳ ಮೂಲಕ ವರ್ತಮಾನವನ್ನು ಶೋಧಿಸಿಕೊಳ್ಳುವಂತಹ ವಿಶೇಷ ಅಂತರ್ಬಂಧವುಳ್ಳ ನಾಟಕ ಮಹಿಳಾ ಭಾರತ.ಇವತ್ತಿನ ಪಾತ್ರಗಳು ಪುರಾಣದ ಅವೆಅವೇ ಪಾತ್ರಗಳೊಂದಿಗೆ ತಮಗೆ ಅರಿಯದಂತೆ ಸಂವಾದಿಸುತ್ತಾ ಸ್ಪಂದಿಸುತ್ತವೆ. ಹಾಗೆ ಮಾಡುತ್ತಲೇ ತಾವೇ ಆ ಪಾತ್ರಗಳು ಆಗುತ್ತಾ, ಹೊರ ಬರುತ್ತ ಇವತ್ತಿಗೂ ಮಹಾಭಾರತ ಮುಗಿಯದ ಕಥೆಯಾಗಿದೆ ಎಂಬುದನ್ನು ಸಶಕ್ತವಾಗಿ ತೋರಿಸಿಕೊಡುತ್ತದೆ.ಡಾ.ಶ್ರೀಪಾದ ಭಟ್ಟರ ನುರಿತ ನಿರ್ದೇಶನ ಸಾಮರ್ಥ್ಯ ನಾಟಕ ಕೃತಿಯನ್ನು ರಂಗದ ಮೇಲೆ ಇನ್ನಿಲ್ಲದಂತೆ ಅರಳಿಸಿದೆ. ಎಳೆಯ ಕಲಾವಿದರನ್ನು ನೀರ್ದೇ಼ಶಕರು ದುಡಿಸಿ ಕೊಂಡ ರೀತಿ ಅದ್ಭುತವೆನ್ನಲೇ ಬೇಕು.ಮನಸ್ಸಿನಲ್ಲಿ ಕೆತ್ತಿ ನಿಲ್ಲಿಸುವ ವಿನ್ಯಾಸ ಸೂಕ್ಷ್ಮವುಳ್ಳ ದೃಶ್ಯಾವಳಿಗಳು, ನೆಳಲು ಬೆಳಕು ಸಂಯೋಜನೆ,ಸಂಗೀತ,ಬೇರೆ ಭಾ಼ಷೆಯದು ಎಂದು ಒಂದಿನಿತು ಅನಿಸದಂತಹಾ ಮೂಲಕೃತಿಯ ಕನ್ನಡ ರೂಪಾಂತರ ( ಅಭಿಲಾಷಾ ಎಸ್.) ,ಇದೇ ಪ್ರಥಮವಾಗಿ ರಂಗವೇರುವ ನಟನಟಿಯರ ಭಾವಪೂರ್ಣ ನಟನೆ - ಎಲ್ಲವೂ ನಾಟಕದ ಆಶಯವನ್ನು ಎತ್ತಿ ಹಿಡಿಯುವಲ್ಲಿ ತಮ್ಮದೇ ಸಾರ್ಥಕ ಕೊಡುಗೆ ನೀಡಿವೆ. ನೋಡಿದ ಮೇಲೆ ಕಾಡುವ ಹಾಗೆ, ನಾಟಕ ವೀಕ್ಷಣೆಯನ್ನು ಒಂದು ಅನುಭವವಾಗಿಸಿದ ನಿರ್ದೇಶಕ ಡಾ. ಶ್ರೀಪಾದ ಭಟ್ ಅವರಿಗೆ ಮತ್ತು ಪ್ರಸ್ತುತ ಪಡಿಸಿದ ರಥಬೀದಿ ಗೆಳೆಯರು ಸಂಸ್ಥೆಗೆ ಹಾರ್ದಿಕ ಅಭಿನಂದನೆಗಳು.

No comments:

Post a Comment